ಕೆಜಿಎಫ್ ವಕೀಲರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಗುರು ಸಾಲು ಶ್ರೀನಿವಾಸಲು ನಾಮಪತ್ರ ಸಲ್ಲಿಕೆ ಕೆಜಿಎಫ್: ನಗರದ ನ್ಯಾಯಾಲಯದ ಆವರಣದಲ್ಲಿ ಹಿರಿಯ ವಕೀಲರು ಗುರು ಸಾಲು ಶ್ರೀನಿವಾಸಲು ಅವರ ಅಪಾರ ಬೆಂಬಲಿಗರಿಂದ ವಕೀಲರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ಮಧ್ಯಾಹ್ನ 2 ಗಂಟೆಯಲ್ಲಿ ನಾಮಪತ್ರ ಸಲ್ಲಿಸಿದರು.ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರೆ ವಕೀಲರ ಎಲ್ಲಾ ಸಮಸ್ಯೆಗಳು ಸ್ಪಂದಿಸುತ್ತೇನೆ. ಪ್ರಮುಖವಾಗಿ ಮಹಿಳಾ ವಕೀಲರಿಗೆ ಆದ್ಯತೆ ನೀಡುತ್ತೇನೆ. ವಕೀಲರ ಲೇಔಟ್ ನಿರ್ಮಾಣ ಮಾಡಿ ಎಲ್ಲಾ ವಕೀಲರಿಗೆ ನಿವೇಶನ ವಿತರಣೆ ಮಾಡುವುದು ವಕೀಲರಿಗೆ ಸಿಗಬೇಕಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿಕೊಡುತ್ತೇನೆ.