ಮದ್ದೂರು ತಾಲ್ಲೂಕು ಭಾರತೀನಗರದಲ್ಲಿ 70ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ ಮತ್ತು ಜಾನಪದ ಕಲಾ ಪ್ರದರ್ಶನ ವಿಜೃಂಭಣೆಯಿಂದ ನಡೆಯಿತು. ಜಾನಪದ ಪರಿಷದ್ ಮದ್ದೂರು ತಾಲ್ಲೂಕು ಘಟಕ, ಪ್ರಗತಿ ಪರ ಸಂಘಟನೆಗಳ ಸಮನ್ವಯ ಸಮಿತಿ ಭಾರತೀನಗರ, ಸಿ.ಎ.ಕೆರೆ ಹೋಬಳಿ ಜಾನಪದ ಮತ್ತು ರಂಗಭೂಮಿ ಕಲಾವಿದರ ಬಳಗ ಭಾರತೀನಗರ, ಜನನಿ ವಿದ್ಯಾಸಂಸ್ಥೆ ಭಾರತೀನಗರ ಇವರ ಸಹಯೋಗದಲ್ಲಿ ನಡೆದ ಸಮಾರಂಭದಲ್ಲಿ ನಿವೃತ್ತ ಮುಖ್ಯಶಿಕ್ಷಕ ಎಂ.ಮಾಯಪ್ಪ ಅವರು ಮಾತನಾಡಿ, ಕನ್ನಡ ನಾಡು ಶ್ರೀಮಂತವಾದ ನಾಡು, ಈ ನಾಡಿನಲ್ಲಿ ನಾವು ಹುಟ್ಟಿರುವುದು ನಮ್ಮೆಲ್ಲರ ಸೌಭಾಗ್ಯ. ಕನ್ನಡ ಕಂಪು, ಕನ್ನಡದ ಪರಿಸರ, ಇದೆಯೇ ಎಂದು ಅಮಲೋಕನ ಮಾಡಿದಾಗ ಅನೇಕ ನಿದರ್ಶನಗಳ ಮೂಲ