ಸಿದ್ಧಾಪುರ: ಬೆಂಗಳೂರು ಕಾಲ್ತುಳಿತ ಪ್ರಕರಣಕ್ಕೆ ಆರ್ಸಿಬಿ, ಕ್ರೀಡಾ ಸಂಸ್ಥೆ ಹೊಣೆ: ಪಟ್ಟಣದಲ್ಲಿ ಶಾಸಕ ಭೀಮಣ್ಣ ನಾಯ್ಕ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸರಕಾರ ಹೊಣೆಗಾರ ಅಲ್ಲ ಎಂದು ಶಾಸಕ ಭೀಮಣ್ಣ ನಾಯ್ಕ ಸಿದ್ದಾಪುರ ಪಟ್ಟಣದಲ್ಲಿ ಹೇಳಿದ್ದಾರೆ. ಈ ಬಗ್ಗೆ ಮಾಧ್ಯಮದವರೊಂದಿಗೆ ಸೋಮವಾರ ಮಧ್ಯಾಹ್ನ 2ಕ್ಕೆ ಮಾತನಾಡಿ ಘಟನೆಗೆ ಕ್ರೀಡಾ ಸಂಸ್ಥೆ ಮತ್ತು ಆರ್.ಸಿ.ಬಿ. ಹೊಣೆಗಾರರು ಎಂದು ಆರೋಪಿಸಿದರು. ಈ ಘಟನೆ ಬಗ್ಗೆ ಸರಕಾರ ಏಕೆ ಹೊಣೆ ಹೊರಬೇಕು? ವಿಧಾನಸೌಧದ ಮುಂಭಾಗ ಯಾವುದೇ ತೊಂದರೆ ಆಗಲಿಲ್ಲ. ಕ್ರೀಡಾ ಸಂಸ್ಥೆ ಭದ್ರತೆ ತೆಗೆದುಕೊಂಡು ಮಾಡಿದ್ದರೇ ಯಾವುದೇ ತೊಂದರೆಯಾಗಿರುತ್ತಿರಲಿಲ್ಲ ಎಂದು ಸ್ಪಷ್ಟಪಡಿಸಿದರು.