ಬ್ರೇಕ್ ಫಾಸ್ಟ್ ಮೀಟಿಂಗ್ ಕುರಿತಂತೆ ವಿಧಾನಸೌಧದಲ್ಲಿ ಸಚಿವ ಭೈರತಿ ಸುರೇಶ್ ಅವರು, ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮಾತನಾಡಿ, ಬ್ರೇಕ್ ಫಾಸ್ಟ್ ಮೀಟಿಂಗ್ ಬಗ್ಗೆ ನನಗೆ ಮಾಹಿತಿ ಇಲ್ಲ. ನೀವು ಪ್ರಶ್ನೆ ಮಾಡಿದ ಮೇಲೆ ನನಗೆ ಗೊತ್ತಾಗಿದ್ದು. ಸಿಎಂ ಅವರ ಮನೆಗೆ ಹೋಗಲಿ ನಮ್ಮ ಸಿಎಂ, ನಮ್ಮ ಡಿಸಿಎಂ ಮನೆಗೆ ಹೋಗಲಿ, ಕದನ ಅಂತ ಸಿಎಂ ಹೇಳಿಲ್ಲ ಡಿಸಿಎಂ ಹೇಳಿಲ್ಲ. ವಿಪಕ್ಷ ಅಂದ್ರೆ ಬಿಜೆಪಿ ಬಿಜೆಪಿಯಲ್ಲೇ ಅರವಿಂದ ಲಿಂಬಾವಳಿ ವಿಜಯೇಂದ್ರ ಯತ್ನಾಳ್ ಬಣ ಇದೆ. ಮೊದಲು ಅವರದ್ದನ್ನು ಸರಿಪಡಿಸಿಕೊಳ್ಳಲಿ ಎಂದರು.