ಗುಡಿಬಂಡೆ ತಾಲೂಕಿನ ತೀಲಕುಂಟಹಳ್ಳಿ ಗ್ರಾಮದ ಕೆರೆಯಲ್ಲಿ ಯುವ ಟಿಪ್ಪರ್ ಚಾಲಕನೊಬ್ಬ ಮೃತಪಟ್ಟಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ. ಮೃತನನ್ನು ನವೀನ್ (29) ಎಂದು ಗುರುತಿಸಲಾಗಿದ್ದು, ಇವನು ಮೂಲತಃ ದೇವನಹಳ್ಳಿ ತಾಲೂಕಿನ ವಿಜಯಪುರ ಗ್ರಾಮದ ವಾಸಿ ಎಂದು ತಿಳಿದು ಬಂದಿದೆ. ನವೀನ್ ಇತ್ತೀಚಿನ ದಿನಗಳಲ್ಲಿ ಗುಡಿಬಂಡೆ ಭಾಗದ ಜೆಲ್ಲಿ ಕ್ರಷರ್ನಲ್ಲಿ ಟಿಪ್ಪರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಆದರೆ ಸಾವಿನ ಮುನ್ನ ಅವನು ಕೆರೆಯ ಬಳಿ ಏಕೆ ಬಂದಿದ್ದ, ನೀರಿಗೆ ಹೇಗೆ ಬಿದ್ದನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಅಂಶ ಸಾವಿನ ಬಗ್ಗೆ ಅನುಮಾನಕ್ಕೆ ಕಾರಣವಾಗಿದೆ.