ಎಸ್ ಟಿ ಪಟ್ಟಿಗೆ ಕುರುಬ ಸಮುದಾಯವನ್ನು ಸೇರಿಸಬಾರದೆಂದು ರಾಜ್ಯ ಸರ್ಕಾರಕ್ಕೆ ತಹಶೀಲ್ದಾರ್ ರ ಮೂಲಕ ಎಸ್ ಟಿ ಸಮುದಾಯದ ಮುಖಂಡರು ಇಂದು ಮನವಿ ಸಲ್ಲಿಸಿದರು. ಚಿಂತಾಮಣಿ ನಗರದ ತಹಶೀಲ್ದಾರರ ಕಚೇರಿಯಲ್ಲಿ ತಹಶೀಲ್ದಾರ್ ಸುದರ್ಶನ್ ಯಾದವರನ್ನು ಭೇಟಿ ಮೂಡಿದ ಮುಖಂಡರು,ಈಗಾಗಲೇ ಎಸ್ ಟಿ ಸಮುದಾಯದಲ್ಲಿ ಹಿಂದುಳಿದ ಜನಾಂಗ ಇದೆ. ಅವರಿಗೆ ಸರ್ಕಾರದಿಂದ ಸೂಕ್ತ ಅನುಕೂಲಗಳು ದೊರೆಯುತ್ತಿಲ್ಲ. ಹಾಗಾಗಿ ಸಿಎಂ ಸಿದ್ಧರಾಮಯ್ಯನವರು ಯಾವುದೇ ಕಾರಣಕ್ಕೆ ಕುರುಬ ಸಮುದಾಯವನ್ನು ಎಸ್ ಟಿ ಪಟ್ಟಿಗೆ ಸೇರಿಸಬಾರದೆಂದು ಮನವಿ ಸಲ್ಲಿಸಲಾಯಿತು.