ಕಲಬುರಗಿ : ರಾಜ್ಯದಲ್ಲಿ ಸಿಎಂ ಬದಲಾವಣೆ ಸೇರಿದಂತೆ ಇನ್ಯಾವುದೇ ವಿಚಾರಗಳನ್ನ ಹೈಕಮಾಂಡ್ ನಿರ್ಧರಿಸುತ್ತದೆ.. ನಾನಾಗಲಿ, ಡಿಕೆಶಿಯಾಗಲಿ, ಸಿದ್ದರಾಮಯ್ಯರಾಗಲಿ ಹಿಗೇ ಪ್ರತಿಯೊಬ್ಬರೂ ಹೈಕಮಾಂಡ್ ಆದೇಶದಂತೆ ನಡೆದುಕೊಳ್ಳಬೇಕಾಗುತ್ತದೆಂದು ಕಲಬುರಗಿ ದಕ್ಷಿಣ ಮತಕ್ಷೇತ್ರದ ಕಾಂಗ್ರೆಸ್ ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿದ್ದಾರೆ.. ನವೆಂಬರ್ 29 ರಂದು ಮಧ್ಯಾನ 1 ಗಂಟೆಗೆ ನಗರದಲ್ಲಿ ಮಾತನಾಡಿದ ಅವರು, ಕಳೆದೆರಡುವರೆ ವರ್ಷಗಳಿಂದ ಇಬ್ಬರು ಜೋಡೆತ್ತುಗಳ ಹಾಗೇ ಕೆಲಸ ಮಾಡಿಕೊಂಡು ಬಂದಿದ್ದಿರಿ.. ಸಿಎಂ ಕುರ್ಚಿ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ಸೇರಿಕೊಂಡು ಮಾತಾಡಿಕೊಂಡು ಬನ್ನಿ ಅಂತಾ ಹೈಕಮಾಂಡ್ ಸೂಚಿಸಿದೆ ಅಷ್ಟೇ ಅಂತಾ ಅಲ್ಲಮಪ್ರಭು ಪಾಟೀಲ್ ಸ್ಪಷ್ಟಪಡಿಸಿದ್ದಾರೆ