ಸಿಎಂ ಕಾನೂನು ಸಲಹೆಗಾರ ಹಾಗೂ ಶಾಸಕ ಪೊನ್ನಣ್ಣ ಅವರು ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಡಿಸಿಎಂ ಡಿಕೆ ಶಿವಕುಮಾರ್ ಈ ಹಿಂದೆಯೇ ಬ್ರೇಕ್ ಫಾಸ್ಟ್ ಗೆ ಕರೆದಿದ್ದರು ದಿನಾಂಕ ನಿಗದಿ ಆಗಿರಲಿಲ್ಲ. ಕದನ ವಿರಾಮ ಅನ್ನೋದು ಸರಿಯಲ್ಲ, ಈ ಹಿಂದೆ ಸಿಎಂ ಬಳಿ ಮೊಬೈಲ್ ಇರಲಿಲ್ಲ, ಅವರು ಬೇರೆಯವರ ಮೊಬೈಲ್ ನಲ್ಲಿ ಮಾತನಾಡುವುದು. ಹೀಗಾಗಿ ನಾನು ಜೊತೆಯಲ್ಲಿ ಇದ್ದೀನಿ ಅಂತ ಗೊತ್ತಾಗಿ ಅವರಿಗೆ ಕರೆ ಮಾಡಿ ಕೊಟ್ಟೇ. ಸಿಎಂ ಮತ್ತು ಡಿಸಿಎಂ ಇಬ್ಬರು ರಾಜ್ಯದ ಹಿತಾಸಕ್ತಿ ಕಾಪಾಡಲು ಸಿದ್ದವಾಗಿದ್ದಾರೆ. ಆ ಸಂದೇಶವನ್ನ ಇಬ್ಬರೂ ಕೂಡ ಕೊಟ್ಟಿದ್ದಾರೆ ಎಂದರು.