ರಾಯಚೂರು: ತುಂಗಭದ್ರ ಆಣೆಕಟ್ಟಿಗೆ ತ್ವರಿತಗತಿಯಲ್ಲಿ ಗೇಟ್ ಅಳವಡಿಸಲು ಸಚಿವ ಬೋಸರಾಜು ಸೂಚನೆ
ನಿಗದಿತ ಸಮಯದೊಳಗೆ ತುಂಗಭದ್ರಾ ಅಣೆಕಟ್ಟೆಯ ಕ್ರಸ್ಟ್ ಗೇಟ್ ಗಳನ್ನು ಅಳವಡಿಸಿ ರೈತರಿಗೆ ತೊಂದರೆಯಾಗದಂತೆ ತುಂಗಭದ್ರ ಬೋರ್ಡ್ ಮಂಡಳಿ ಹಾಗೂ ಅಧಿಕಾರಿಗಳು ಜೂನ್ ಅಂತ್ಯದೊಳಗಾಗಿ ಗೇಟ್ ಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ ಎಸ್ ಬೋಸರಾಜು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಂಗಳವಾರ 12 ಗಂಟೆಗೆ ನಡೆದ ಸಭೆಯಲ್ಲಿ ಈಗಾಗಲೆ 15 ಗೇಟ್ ಗಳು ರಡಿಯಾಗಿವೆ ಆಂದ್ರ ಸರ್ಕಾರ 20 ಕೋಟಿ ಬಿಡುಗಡೆಗೊಳಿಸಿದೆ, ಕರ್ನಾಟಕ ಸರ್ಕಾರದಿಂದ 10 ಕೋಟಿ ಬಿಡುಗಡೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನು ಉಳಿದ 18 ಗೇಟ್ ಗಳನ್ನು ಗುತ್ತೆದಾರರು ತಕ್ಷಣ ತಯಾರು ಮಾಡಿ, ತ್ವರಿತವಾಗಿ ಗೇಟ್ ಅಳವಡಿಸಲು ತಾಂತ್ರಿಕ ಅಧಿಕಾರಿಗಳಿಗೆ ಸೂಚಿಸಿದರು.