ಮಂಡ್ಯ: ತಾಲೂಕಿನ ಬೂದನೂರು ಗ್ರಾಮ ಪಂಚಾಯತಿ ವತಿಯಿಂದ ಆಯೋಜಿಸಿದ್ದ ಗ್ರಾಮಸಭೆ ಜನರ ಅಗತ್ಯ ಕೋರಂ ಇಲ್ಲದೆ ಮುಂದೂ ಡಿಕೆಯಾದ ಪ್ರಸಂಗ ಜರುಗಿದೆ. ಗ್ರಾಮಸಭೆಯ ನೋಡೆಲ್ ಅಧಿ ಕಾರಿಯಾದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾರಾಯಣ್ ಆಗಮಿಸಿದ್ದರು. ಸಭೆ ನಿಗದಿತ ಬೆಳಿಗ್ಗೆ 12 ಅರಂಭಿಸಲು ಪಿಡಿಒ ಸ್ವಾಮಿ , ಕಾರ್ಯದರ್ಶಿ ಪವಿತ್ರ, ಗ್ರಾಮ ಆಡಳಿತಾಧಿಕಾರಿ ಮೇಘ ಸೇರಿದಂತೆ ಕೆಲ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಹಾಜರಾಗಿ 2 ಗಂಟೆ ಕಾಯ್ದರು. ಬಳಿಕ ನೋಡೆಲ್ ಅಧಿಕಾರಿ ಮತ್ತೆ 15 ನಿಮಿಷ ಕಾಲಾವಕಾಶ ನೀಡಿ ಕಾಯ್ದರೂ ಜನ ಬರಲೇ ಇಲ್ಲ. ಬಳಿಕ ಅಧ್ಯಕ್ಷೆ ಮಾನಸ ಅವರು, ಗ್ರಾಮಸಭೆ ಮುಂದೂಡಿರು ವುದಾಗಿ ಘೋಷಿಸಿದರು.