ಶಿರಸಿ: ಮಳೆ ಆರ್ಭಟಕ್ಕೆ ಬೆಳ್ಳನಕೇರಿ ಸೇರಿ ವಿವಿಧೆಡೆ ಮನೆ, ಅಡಿಕೆ ತೋಟಕ್ಕೆ ಹಾನಿ
ಶಿರಸಿ: ತಾಲೂಕಿನಲ್ಲಿ ಸೋಮವಾರ ಆರ್ಭಟದ ಮಳೆಯಿಂದ ಕೆಲವಡೆ ಹಾನಿಯಾಗಿದೆ. ತಾಲೂಕಿನ ಬೆಳ್ನಕೇರಿಯ ಮಡಿಕೇಶ್ವರದ ಗುತ್ಯಪ್ಪ ಹೊಳೆನಿಂಗಪ್ಪ ಚಲವಾದಿ ವಾಸ್ತವ್ಯದ ಮನೆಯ ಹಿಂಭಾಗದ ಗೋಡೆ ಬಿದ್ದು ೫ ಸಾವಿರ ರೂ. ಹುಲದೇವನಸರ ಸಮೀಪದ ವಕ್ಕಲಕೊಪ್ಪದ ಗಣಪತಿ ರಾಮಾ ಗೌಡ ಅವರಿಗೆ ಸೇರಿದ ಅಡಿಕೆ ತೋಟದ ಮೇಲೆ ಮರ ಬಿದ್ದು, ಅಡಿಕೆ ಮರ, ಬಾಳೆ ಗಿಡ ಹಾಗೂ ಕಾಳುಮೆಣಸಿನ ಬಳ್ಳಿಗಳು ಮುರಿದು 40 ಸಾವಿರ ರೂ. ಹಾನಿಯಾಗಿದೆ.