ಹುಣಸಗಿ: ಮಳೆಯಿಂದ ಹಾನಿಗೊಳಗಾದ ಉಪ್ಪಲದಿನ್ನಿ ಗ್ರಾಮದ ಪ್ರದೇಶಗಳಿಗೆ ಬಿಜೆಪಿ ಪಕ್ಷದ ರಾಜ್ಯ ಉಪಾಧ್ಯಕ್ಷರು ಹಾಗೂ ಮಾಜಿ ಸಚಿವ ರಾಜುಗೌಡ ಭೇಟಿ ಪರಿಶೀಲನೆ
ಮಳೆಯಿಂದ ಹಾನಿಗೊಳಗಾದ ಉಪ್ಪಲದಿನ್ನಿ ಗ್ರಾಮದ ಪ್ರದೇಶಗಳಿಗೆ ಮಾಜಿ ಸಚಿವ ರಾಜುಗೌಡ ಭೇಟಿ ಪರಿಶೀಲನೆ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆ ಉಪ್ಪಲದಿನ್ನಿ ಗ್ರಾಮದ ಸುತ್ತಮುತ್ತಲಿನ ಜಮೀನಿನಲ್ಲಿ ಜಲಾವೃತವಾದ ಹತ್ತಿ, ತೊಗರಿ, ಭತ್ತ, ಇತರ ಬೆಳೆಗಳನ್ನು ಬಿಜೆಪಿ ಪಕ್ಷದ ರಾಜ್ಯ ಉಪಾಧ್ಯಕ್ಷರು ಹಾಗೂ ಮಾಜಿ ಸಚಿವ ರಾಜುಗೌಡ ಬೆಳೆ ವೀಕ್ಷಿಸಿ ಅಧಿಕಾರಿಗಳಿಂದ ಸಮರ್ಪಕ ಮಾಹಿತಿ ಪಡೆದುಕೊಂಡು ಸೂಕ್ತ ರೀತಿಯಲ್ಲಿ ಬೆಳೆ ಹಾನಿ ಸಮೀಕ್ಷೆ ಕೈಗೊಳ್ಳುವಂತೆ ಕಂದಾಯ ಮತ್ತು ಕೃಷಿ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ರೈತರು ಭಾಗವಹಿಸಿದ್ದರು