ಜಯಮಂಗಲ ಗ್ರಾಮಸ್ಥರಿಂದ ಶಾಸಕಿಯನ್ನು ತೆಡೆದು ಪ್ರಶ್ನೆಗಳ ಸುರಿಮಳೆ ಜಯಮಂಗಲ ಗ್ರಾಮದಿಂದ ತಂಬಾರ್ಲಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಹೊರಟಿದ್ದ ಶಾಸಕಿ ರೂಪಕಲಾ ಶಶಿಧರ್ ಗೆ ಬುಧವಾರ ಮಧ್ಯಾನ 1:00 ಯಲ್ಲಿ ಜಯಮಂಗಲ ಗ್ರಾಮಸ್ಥರು ತಡೆದು ಪ್ರಶ್ನೆಗಳ ಸುರಿಮಳೆ ಸುರಿದಿದ್ದಾರೆ. ಟಿ.ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಯಮಂಗಲ ಗ್ರಾಮಸ್ಥರಿಂದ ಸುಮಾರು ವರ್ಷಗಳಿಂದ ಮನೆಗಳು ಇಲ್ಲದೆ ಗುಡಿಸಿಲಿನಲ್ಲೇ ಜೀವನ ನಡೆಸುತ್ತಿದ್ದೇವೆ ಸರ್ಕಾರದಿಂದ ಯಾಕೆ ಮನೆಗಳನ್ನು ಮಂಜೂರು ಮಾಡಿಸಿಲ್ಲ ಎಂದು ಪ್ರಶ್ನಿಸಿದರು.