ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಲಯ ಆಯುಕ್ತರು ವಾರ್ಡ್ ನಂ 14 ಮಾರುಕಟ್ಟೆಗೆ ಭೇಟಿ ನೀಡಿ ಸ್ವಚ್ಛತಾ ಕಾರ್ಯದ ಪರಿವಿಕ್ಷಣೆ ಮಾಡಿ ಅಂಗಡಿಕಾರರಿಗೆ ಅಂಗಡಿಗಳ ಮುಂದೆ ಸ್ವಚ್ಛತಾ ಕಾಪಾಡಲು ತಿಳಿಸಿ ಅಂಗಡಿಯ ಮುಂದುಗಡೆ ಕಸ ಹಾಕಿದ ಅಂಗಡಿಕಾರರಿಗೆ ದಂಡ ವಿಧಿಸಲಾಯಿತು ಹಾಗೂ ಅಂಗಡಿಕಾರರಿಗೆ ಮತ್ತು ಸಾರ್ವಜನಿಕರಿಗೆ ನಿಷೇದಿತ ಏಕ ಬಳಕೆ ಪ್ಲಾಸ್ಟಿಕ್ ಬಳಸದಂತೆ ತಿಳುವಳಿಕೆ ನೀಡಿದರು. ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಕರಾದ ಶಾಂತಗೌಡ ಬಿರಾದಾರ, ಸೂಪರ್ವೈಸರ್ ಗಳಾದ ದಯಾನಂದ ಉಗರಗೋಳ, ಅಶೋಕ ರಾಣೋಜಿ ಹಾಗೂ ಪೌರಾಕಾರ್ಮಿಕರು ಹಾಜರಿದ್ದರು.