ಶಿರಸಿ: ಮರಾಠಿಕೊಪ್ಪದ ಜೋಡುಕಟ್ಟೆ ಸಮೀಪದಲ್ಲಿ ಮನೆ ಕುಸಿತ ಪ್ರದೇಶಕ್ಕೆ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಭೇಟಿ, ಸಾಂತ್ವನ
ನಗರಸಭೆ ವ್ಯಾಪ್ತಿಯಲ್ಲಿನ ಮರಾಠಿಕೊಪ್ಪದ ಜೋಡುಕಟ್ಟೆ ಸಮೀಪದಲ್ಲಿ ಭಾನುವಾರ ಮನೆ ಕುಸಿತ ಪ್ರದೇಶಕ್ಕೆ ಸೋಮವಾರ ಮಧ್ಯಾಹ್ನ 12ಕ್ಕೆ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಭೇಟಿ ನೀಡಿ ಸಂತ್ರಸ್ತೆ ರಾಧಾ ಗೋಪಾಲ ನಾಯ್ಕ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ವೇಳೆ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇರಳದಲ್ಲಿ ಭೂಕುಸಿತದ ಸಂದರ್ಭದಲ್ಲಿ ಕೇರಳಕ್ಕೆ 100 ಮನೆ ನಿರ್ಮಿಸಿಕೊಡುವ ಭರವಸೆ ನೀಡಿ, ಮನೆಯನ್ನುನಿರ್ಮಿಸಿ ಕೊಟ್ಟಿದ್ದರು. ಕರ್ನಾಟಕದಲ್ಲಿ ಮನೆ ಕುಸಿತ ಆದರೆ 1 ಲಕ್ಷ ಭಿಕ್ಷೆಯಂತೆ ನೀಡುವುದು ಅನ್ಯಾಯವಾಗಿದೆ ಎಂದರು.