ಸಿಂಧನೂರು: ಕಲಮಂಗಿ ಬಳ ಭೀಕರ ರಸ್ತೆ ಅಪಘಾತ, ಉಪನ್ಯಾಸಕಿ ಸ್ಥಳದಲ್ಲೇ ಸಾವು
ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಕಲಮಂಗಿ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಉಪನ್ಯಾಸಕಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಅವರ ಪತಿ ಮತ್ತು ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಸಿಂಧನೂರು ತಾಲ್ಲೂಕಿನ ಕಲಮಂಗಿ ಬಳಿ ಭಾನುವಾರ 5 ಗಂಟೆಗೆ ಈ ದುರ್ಘಟನೆ ಸಂಭವಿಸಿದೆ. ಮೃತರನ್ನು ತಾವರಗೇರಾ ಶಶಿಧರ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಅಕ್ಕಮಹಾದೇವಿ (36) ಎಂದು ಗುರುತಿಸಲಾಗಿದೆ. ಹುಲ್ಲು ತುಂಬಿದ್ದ ಟ್ರಾಕ್ಟರ್ಗೆ ಕಾರು ನೇರವಾಗಿ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.