ಕಲಬುರಗಿ : ನಮ್ಮ ಸಮಾಜಕ್ಕೆ ಸಚಿವ ಪ್ರಿಯಾಂಕ್ ಖರ್ಗೆಯವರು ಮರಣ ಶಾಸನ ಬರೆಯಲು ಸಿದ್ದರಾಗಿದ್ದಾರೆಂದು ತಳವಾರ್ ಸಮಾಜದ ರಾಜ್ಯಾಧ್ಯಕ್ಷ ಸರ್ಧಾರದ ರಾಯಪ್ಪ ಕಿಡಿಕಾರಿದ್ದಾರೆ.. ನವೆಂಬರ್ 5 ರಂದು ಮಧ್ಯಾನ 12 ಗಂಟೆಗೆ ಕಲಬುರಗಿಯಲ್ಲಿ ಮಾತನಾಡಿದ ಅವರು, ತಳವಾರ್ ಸಮಾಜದಿಂದ ಎಸ್ಟಿ ಸರ್ಟಿಫಿಕೇಟ್ ವಾಪಾಸು ಪಡೆಯಲು ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಧಿಕಾರಿಗಳಿಗೆ ಹೆದರಿಸುತ್ತಿದ್ದಾರೆಂದು ರಾಯಪ್ಪ ಕಿಡಿಕಾರಿದ್ದಾರೆ.. ಎಸ್ಟಿ ಸರ್ಟಿಫಿಕೇಟ್ಗಾಗಿ ಕಳೆದ 6 ತಿಂಗಳಿನಿಂದ ಧರಣಿ ನಡೆಸಲಾಗ್ತಿದೆ.. ಆದರೂ ಸ್ಪಂದನೆ ಸಿಕ್ಕಿಲ್ಲ.. ಹೀಗಾಗಿ ನ10 ರಂದು ಸಚಿವರು, ಶಾಸಕರ ಮನೆ ಮುಂದೆ ಧರಣಿ ಕೈಗೊಳ್ಳಲಾಗುತ್ತದೆಂದು ಸರ್ಧಾರ್ ರಾಯಪ್ಪ ಎಚ್ಚರಿಕೆ ನೀಡಿದರು.