ಸಿಎಂ ಸುಧೀರ್ಘ ಅವಧಿ ಆಡಳಿತ ವಿಚಾರಕ್ಕೆ ಸಂಬಂಧಿಸಿ ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ವಿಧಾನಸೌಧದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರು, ಸಿದ್ದರಾಮಯ್ಯ ಅರಸರ ದಾಖಲೆ ಸರಿ ಮಾಡಿದ್ದಾರೆ. ದಾಖಲೆ ಸರಿಗಟ್ಟಿರುವ ದಿವಸವಿದು. ಅವರಿಗೆ ಬೆಸ್ಟ್ ವಿಶಸ್ ಹೇಳಿದ್ದೇನೆ. 28 ಕ್ಕೂ ನೀವೇ ಸಿಎಂ ಆಗ್ಬೇಕು ಅಂದಿದ್ದೇನೆ. ಹಿಂದೆ ಅರಸರು ಇತಿಹಾಸ ಸೃಷ್ಟಿಸಿದ್ದರು. ಭೂ ಸುಧಾರಣಾ ಕಾಯ್ದೆ ತಂದವರು. ಸಂವಿಧಾನದ 9ನೇ ಶೆಡ್ಯೂಲ್ ಗೆ ತಂದವರು. ಅದು ಒಂದು ಐತಿಹಾಸಿಕ ಕಾರ್ಯಕ್ರಮ. 3 ಲಕ್ಷಕ್ಕೂ ಹೆಚ್ಚು ಭೂಮಿ ಹಂಚಿದ್ದರು. ಹಾವನೂರು ವರದಿಯನ್ನ ಜಾರಿಗೆ ತಂದವರು. ಸಾರ್ವಕಾಲಿಕ ದಾಖಲೆ ಅದು ಎಂದರು.