ಹನೂರು: ರೈತ ದಿನಾಚರಣೆ ವೇಳೆಯೆ ವಡೆಕಹಳ್ಳದಲ್ಲಿ ರೈತನೋರ್ವನಿಂದ ಅರಬೆತ್ತಲೆ ಪ್ರತಿಭಟನೆ
ಹನೂರು ರೈತ ದಿನಾಚರಣೆ ದಿನವೆ ರೈತನೋರ್ವ ನೀರಾವರಿ ಸೌಲಭ್ಯಕ್ಕಾಗಿ ಅರಬೆತ್ತಲ್ಲೆ ಪ್ರತಿಭಟನೆ ನೆಡೆಸಿದ ಪ್ರಸಂಗ ಜರುಗಿದೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ದಂಟಳ್ಳಿ ಏತನೀರಾವರಿ ಹೋರಾಟ ಸಮಿತಿವತಿಯಿಂದ ವಡೆಕಳ್ಳ ಗ್ರಾಮದಲ್ಲಿ ಕಾವೇರಿ ನದಿಯಿಂದ ದಂಟಳ್ಳಿ ಮಾರ್ಗವಾಗಿ ಏತನೀರಾವರಿ ಯೋಜನೆ ಕಲ್ಪಿಸುವಂತೆ ಕಳೆದ ಹಲವು ದಿನಗಳಿಂದ ಪ್ರತಿಭಟನೆ ನಡೆಯುತ್ತಿದ್ದು ಮಂಗಳವಾರದಂದು ಈ ಧರಣಿ 58 ನೇ ದಿನಕ್ಕೆ ಕಾಲಿಟ್ಟಿದ್ದೆ ಈ ಅಹೋರಾತ್ರಿ ಧರಣಿಯ ವೇಳೆ ಬೈಕ್ ರ್ಯಿ ಅರೆಬೆತ್ತಲೆ ಚಳುವಳಿ ಹಾಗೂ ರಕ್ತದಾನ ಚಳುವಳಿ ಮಾಡಿ ಗಮನಸೆಳೆದರು ಈ ವೇಳೆ ಸಗಾಯರಾಜ್ ಎಂಬ ರೈತ ಹೋರಾಟಗಾರ ಅರೆಬೆತ್ತಲೆ ಚಳುವಳಿ ನೆಡೆಸಿಕಾವೇರಿ ನದಿಯಿಂದ ದಂಟಳ್ಳಿ ಮಾರ್ಗವಾಗಿ ಏತನೀರಾವರಿ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿದರು