ಹೊನ್ನಾವರ : ತಾಲೂಕಿನ ಕೊಡಾಣಿ ಪಂಚಾಯತ ವ್ಯಾಪ್ತಿಯ ಶರಾವತಿ ನದಿ ಎಡದಂಡೆಯ ಅನಿಲಗೋಡನಲ್ಲಿ ನಡೆಯುವ ಸುಮಾರು ಐದು ನೂರು ವರ್ಷಗಳ ಇತಿಹಾಸ ಸಾರುವ ಕುಮಾರರಾಮನ ಹಾಗೂ ಊರಿನ ಆರಾಧ್ಯ ದೇವರಾದ ಮಹಾಸತಿ ದೇವಸ್ಥಾನದಲ್ಲಿ ನಡೆಯುವ ಬಂಡಿ ಹಬ್ಬ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಸಚಿವ ಮಂಕಾಳು ವೈದ್ಯ ಪಾಲ್ಗೊಂಡು ದೇವರಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದುಕೊಂಡುಕ್ಷೇತ್ರದ ಒಳಿತಿಗಾಗಿ ಪ್ರಾರ್ಥಿಸಿದರು.