ಸಿದ್ದಾಪುರದ ನೆಲ್ಲಿಮಡ್ಕಿ ನಿವಾಸಿ ಮಹೇಶ ವೆಂಕಟ್ರಮಣ ನಾಯ್ಕ (33) ಎಂಬುವವರು ಗರಿಗಡ್ಡೆಯ ಗುಡ್ಡದ ಮೇಲಿರುವ ವಿದ್ಯುತ್ ಕಂಬವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಬಗ್ಗೆ ಬುಧವಾರ ಸಂಜೆ 5ಕ್ಕೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ. ರಸ್ತೆಯಲ್ಲೇ ಬಿದ್ದಿದ್ದ ಬೈಕ್ ಹಾಗೂ ಮೈಮೇಲೆ ಪೂರ್ಣ ಪ್ರಮಾಣದ ಬಟ್ಟೆಗಳಿಲ್ಲದ ಸ್ಥಿತಿಯಲ್ಲಿ ಶವ ಪತ್ತೆಯಾಗಿರುವುದು ಸಾವಿನ ಬಗ್ಗೆ ಹಲವು ಸಂಶಯಗಳಿಗೆ ಕಾರಣವಾಗಿದೆ. ಮಹೇಶ ಅವರು ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ ಎಂದು ಕುಟುಂಬದವರು ಆರೋಪಿಸಿದ್ದು, ಸ್ಥಳಕ್ಕೆ ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.