ಚಳ್ಳಕೆರೆ: ನಾನು ಶಾಸಕನಾಗಿರ್ತಿನಿ ನನಗೆ ಯಾವುದೇ ಮಂತ್ರಿ ಪದವಿ ಬೇಡ:-ತಳುಕಿನಲ್ಲಿ ಶಾಸಕ ಎನ್ ವೈ ಗೋಪಾಲಕೃಷ್ಣ ಹೇಳಿಕೆ
ಚಳ್ಳಕೆರೆ:-ತಳಕು ಮತ್ತು ನಾಯಕನಹಟ್ಟಿ ಹೋಬಳಿಯ ವಿವಿಧ ಕಾಮಮಗಾರಿಗಳ ಉದ್ಘಾಟನೆ ಮತ್ತು ಭೂಮಿ ಪೂಜೆಯನ್ನು ಶಾಸಕ ಎನ್ ವೈ ಗೋಪಾಲಕೃಷ್ಣ ನೆರೆವೆರಿಸಿದರು. ಬುಧವಾರ ತಳಕು ಗ್ರಾಮದ ಹಮಾಲರ ಸಮುದಾಯ ಭವನ ಮತ್ತು ನಾಯಕನಹಟ್ಟಿ ಸಮೀಪದ ಎನ್ ಮಹದೇವಪುರ ಬಸ್ ನಿಲ್ದಾಣ ಕಾಮಗಾರಿ ಭೂಮಿ ಪೂಜೆ, ಕುದಾಪುರ ಲಂಬಾಣಿಹಟ್ಟಿ ನೂತನ ಅಂಗನವಾಡಿ ಕಟ್ಟಡ ಉದ್ಘಾಟನೆ ಹಾಗೂ ಮನಮೈನಹಟ್ಟಿ ರಸ್ತೆ ಅಭಿವೃದ್ಧಿ ಕಾಮಗಾರಿ,ನಾಯಕನಹಟ್ಟಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಜಾಗನೂರಹಟ್ಟಿ ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣ ಭೂಮಿ ಪೂಜೆ ನೆರೆವೇರಿಸಿದರು.