ಜಗತ್ತು 21 ಶತಮಾನದಲ್ಲಿ ಇದ್ದರೂ, ಸಮಾಜವು ಮೂಡನಂಬಿಕೆಗಳಿಗೆ ಆಕರ್ಷಿತವಾಗಿರುವುದು ವಿಜ್ಞಾನಕ್ಕೆ ದೊಡ್ಡ ಸವಾಲಾಗಿದ್ದು, ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸಿ, ಮೌಡ್ಯತೆಯನ್ನು ತೊಲಗಿಸುವ ಮೂಲಕ ಪ್ರಜಾಪ್ರಭುತ್ವದ ವಾರಸುದಾರರ ಭವಿಷ್ಯದ ಕುರಿತು ಚಿಂತನೆ ನಡೆಸುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ ಎಂದು ಮಹಾನಗರ ಪಾಲಿಕೆಯ ಹಿರಿಯ ಸದಸ್ಯ ಜಯಣ್ಣ ಹೇಳಿದರು. ಭಾನುವಾರ 11 ಗಂಟೆಗೆ ನಗರದ ಕನ್ನಡ ಭವನದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಶಿಕ್ಷಕ, ಶಿಕ್ಷಕ, ಮತ್ತು ಸಮುದಾಯ ಒಂದು ವೈಜ್ಞಾನಿಕ ಅವಲೋಕನ ಹಾಗೂ ಆಕಾಶ ನಮಗೆಷ್ಟು ಗೊತ್ತು ಎಂಬದು ತಲಿಯಬೇಕಿದೆ ಎಂದರು.