ಕೆಡಿಪಿ ಸಭೆ ಬಸವಕಲ್ಯಾಣ: ಅತಿವೃಷ್ಠಿಗೆ ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಪರಿಹಾರ ಕಲ್ಪಿಸುವಲ್ಲಿ ವಿಮಾ ಕಂಪನಿಗಳಿAದ ಅನ್ಯಾಯವಾದರೆ ಸುಮ್ಮನೆ ಬಿಡುವುದಿಲ್ಲ, ರೈತರಿಗೆ ಮೋಸ, ವಂಚನೆ ಮಾಡುವ ಕಂಪನಿಗಳ ಪ್ರತಿನಿಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಶರಣು ಸಲಗರ ಎಚ್ಚರಿಸಿದರು. ತಾಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಮಾ ಕಂಪನಿಯಿAದ ಬೆಳೆ ಹಾನಿ ಸಮೀಕ್ಷೆ, ಹಾಗೂ ಪರಿಹಾರ ನೀಡುವಲ್ಲಿ ರೈತರಿಗೆ ಅನ್ಯಾಯವಾದರೆ ವಿಧಾನಸಭೆ ಅಧಿವೇಶನದಲ್ಲಿ ಧ್ವನಿ ಎತ್ತುತ್ತೆನೆ ಎಂದರು. ಬೆಳೆ ವಿಮೆ ಮಂಜೂರಿಗಾಗಿ ಸಮೀಕ್ಷೆ ಸರಿಯಾಗಿ ನಡೆಯುತ್ತಿಲ್ಲ. ರೈ