ಬೆಂಗಳೂರು ಪೂರ್ವ: ಬ್ಯಾಟರಾಯನಪುರದಲ್ಲಿ 5ನೇ ರಾಜ್ಯ ಹಣಕಾಸು ಆಯೋಗ — ನಗರ ಪಾಲಿಕೆಯ ಹಣಕಾಸು, ಅನುದಾನ ಮತ್ತು ಮೂಲಸೌಕರ್ಯ ಕುರಿತ ಚರ್ಚೆ
ಬ್ಯಾಟರಾಯನಪುರದ ನಗರ ಪಾಲಿಕೆ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ 5ನೇ ರಾಜ್ಯ ಹಣಕಾಸು ಆಯೋಗದ ಗೌರವಾನ್ವಿತ ಅಧ್ಯಕ್ಷ ಡಾ. ಸಿ. ನಾರಾಯಣಸ್ವಾಮಿ ರವರ ಅಧ್ಯಕ್ಷತೆಯಲ್ಲಿ ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತ ಶ್ರೀ ಪೊಮ್ಮಲ ಸುನೀಲ್ ಕುಮಾರ್ ಅವರ ನೇತೃತ್ವದಲ್ಲಿ ಸಮಾಲೋಚನಾ ಸಭೆ ನಡೆಯಿತು. ಸಭೆಯಲ್ಲಿ ನಗರ ಪಾಲಿಕೆಯ ಸಂಪನ್ಮೂಲ ಕ್ರಯ ಮತ್ತು ಬಳಕೆ, ಸ್ಥಳೀಯ ಆಡಳಿತದ ಆರ್ಥಿಕ ಸ್ಥಿತಿ ಹಾಗೂ ನಗರ ಪಾಲಿಕೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮತ್ತು ಅನುದಾನಗಳ ಅಗತ್ಯತೆ ಕುರಿತು ಚರ್ಚೆ ನಡೆಯಿತು. ಸಭೆಯಲ್ಲಿ ನಗರ ಪಾಲಿಕೆಯ ಅಭಿವೃದ್ಧಿ ಅಪರ ಆಯುಕ್ತೆ, ಜಂಟಿ ಆಯುಕ್ತೆ, ರಾಜ್ಯ ಹಣಕಾಸು ಆಯೋಗದ ಸದಸ್ಯರು, ನಿವೃತ್ತ ನಿಯಂತ್ರಕರು, ರಾಜ್ಯ ಲೆಕ್ಕಪತ್ರ ಇಲಾಖೆಯ ಪ್ರತಿನಿಧಿಗಳು, ಹಾಗೂ ಪಾಲಿಕೆಯ ಎಲ್ಲಾ ಇಲಾಖೆಗಳ ಮುಖ