ಬಂಗಾರಪೇಟೆ: ಗಾಜಗ ಗೇಟ್ ಬಳಿ ಅಪಘಾತದಲ್ಲಿ ಮೃತಪಟ್ಟ ವೈದ್ಯೆಯ ಅಂಗಾಗ ದಾನ ಮಾಡಿದ ಪೋಷಕರು
ಅಪಘಾತದಲ್ಲಿ ಮೃತ ಪಟ್ಟ ವೈದ್ಯೆಯ ಅಂಗಾಗಳನ್ನು ದಾನ ಮಾಡಿದ ಪೋಷಕರು ಕೋಲಾg : ಬೈಕ್ ಅಪಘಾತದಲ್ಲಿ ಮೃತಪಟ್ಟ ವೈದ್ಯಾಧಿಕಾರಿ ಡಾ.ಸಂಧ್ಯಾ (೨೫) ಅಂಗಾಂಗಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಮಾನವೀಯತೆ ಮೆರೆದಿದ್ದಾರೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ೧೧ ತಿಂಗಳುಗಳಿಂದ ಡಾ.ಸಂಧ್ಯಾ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಪ್ರತಿ ನಿತ್ಯ ಕೆಜಿಎಫ್ನಿಂದ ಬೂದಿಕೋಟೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರಯಾಣಿಸುತ್ತಿದ್ದರು. ಡಿ ೬ ಮನೆಯಿಂದ ಆಸ್ಪತ್ರೆಗೆ ತಂದೆಯ ಜೊತೆ ಬೈಕ್ನಲ್ಲಿ ಬರುವ ವೇಳೆ ಡಾ.ಸಂಧ್ಯ ಮಾರ್ಗ ಮಧ್ಯೆ ಗಾಜಗ ಗೇಟ್ ಬಳಿ ಬೈಕ್ ನಿಂದ ಕೆಳಗೆ ಬಿದ್ದಿದ್ದಾರೆ.