ಕಲಬುರಗಿ : ಸಿಎಂ ಬದಲಾವಣೆ ಬಗ್ಗೆ ನಾ ಏನು ಹೇಳೆ ಇಲ್ಲ.. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾಧ್ಯಮಗಳು ಪ್ರಶ್ನೆ ಕೇಳಿದ್ದವು.. ಈ ವೇಳೆ ಹೌದು..ಸಚಿವ ಸಂಪುಟ ವಿಸ್ತರಣೆ ಆಗಲೇಬೇಕು ಅಂತಾ ಹೇಳಿದ್ದೆ.. ಆದರೆ ನನ್ನ ಹೇಳಿಕೆಯನ್ನ ತಿರುಚಿ ಸಿಎಂ ಬದಲಾವಣೆ ಆಗಲೇಬೇಕು ಅಂತಾ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡಿವೆ ಅಂತಾ ಜೇವರ್ಗಿ ಶಾಸಕ ಡಾ ಅಜಯ್ಸಿಂಗ್ ಸ್ಪಷ್ಟಪಡಿಸಿದ್ದಾರೆ.. ಡಿ1 ರಂದು ರಾತ್ರಿ 8.30 ಕ್ಕೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಸಿಎಂ ಬದಲಾವಣೆ ಬಗ್ಗೆ ಮೊನ್ನೆಯಷ್ಟೆ ಸಿಎಂ, ಡಿಸಿಎಂ ಸ್ಪಷ್ಟವಾಗಿ ಹೇಳಿದ್ದು, ನಾನು ಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದೇನೆಂದು ಅಜಯ್ಸಿಂಗ್ ಹೇಳಿದ್ದಾರೆ