ಧಾರವಾಡ: ಧಾರವಾಡದ ಯಾದವಾಡ ರಸ್ತೆಯ ಸ್ಮಶಾನದ ಜಾಗವನ್ನು ಮಾರಾಟಕ್ಕೆ ಕಮಲಾಪುರ, ಮಾಳಾಪುರ ಜನರ ವಿರೋಧ: ನೋಟೀಸ್ ಬೋರ್ಡ್ ಅಳವಡಿಸಿ ಆಕ್ರೋಶ
ಧಾರವಾಡದ ಯಾದವಾಡ ರಸ್ತೆಗೆ ಹೊಂದಿಕೊಂಡಿರುವ ೪ ಎಕರೆ ಸ್ಮಶಾನದ ಜಾಗವನ್ನು ಮಾರಾಟ ಮಾಡುತ್ತಿರುವುದಕ್ಕೆ ಕಮಲಾಪುರ, ಮಾಳಾಪುರ, ಮರಾಠಾ ಕಾಲೊನಿ, ಪತ್ರೇಶ್ವರ ನಗರ, ನಾರಾಯಣಪುರ, ಹರಿಜಕೇರಿ ನಿವಾಸಿಗಳು ಶುಕ್ರವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಲೆ ತಲಾಂತರದಿಂದ ಇದೇ ಜಾಗದಲ್ಲಿ ಹಿರಿಯರನ್ನು ಮಣ್ಣು ಮಾಡುತ್ತಿದ್ದು, ಈ ಭೂಮಿ ಮಾರಾಟಕ್ಕೆ ನಮ್ಮ ವಿರೋಧವಿದೆ ಎಂದು ಜನರು ಜಮೀನು ಕಬ್ಬಾ ಮಾಡಿಕೊಂಡು ನೋಟೀಸ್ ಬೋರ್ಡ್ ಅಳವಡಿಸಿ ಆಕ್ರೋಶ