ಎಸ್. ಅಗ್ರಹಾರ ಹಾಗೂ ಇರಗಸಂದ್ರದಲ್ಲಿ ಕಟ್ಟಡ ಕಲ್ಲು ಗಣಿ ಪರವನಿಗೆ ನೀಡಬಾರದೆಂದು ಡಿ. ೨ ರ ಮಂಗಳವಾರ ರೈತ ಸಂಘ ಪ್ರತಿಭಟನೆಗೆ ತೀರ್ಮಾನಿ ಎಸ್. ಅಗ್ರಹಾರ ಸರ್ವೆ ನಂ. ೬೦ ಹಾಗು ಇರಗಸಂದ್ರ ಸರ್ವೆ ನಂ. ೫೨ ರಲ್ಲಿ ಕಟ್ಟಡ ಕಲ್ಲು ಗಣಿ ಪರವನಿಗೆ ನೀಡಬಾರದೆಂದು ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿ ನಮ್ಮ ಆರೋಗ್ಯ ಹಾಗೂ ಜಾನುವಾರಗಳ ರಕ್ಷಣೆಗಾಗಿ ಡಿ. ೨ ರ ಮಂಗಳವಾರ ಜಾನುವಾರಗಳ ಸಮೇತ ಕೋಲಾರ ಚಿಂತಾಮಣಿ ರಾಜ್ಯ ಹೆದ್ದಾರಿ ಚಿಟ್ನಹಳ್ಳಿ ಗೇಟ್ ಬಂದ್ ಮಾಡುವುದಾಗಿ ಗಣಿಗಾರಿಕೆ ನಡೆಯುವ ಸೇರಿದ ಗ್ರಾಮಸ್ಥರ ಸಭೆಯಲ್ಲಿ ಗುರುವಾರ ರೈತ ಸಂಘ ತೀರ್ಮಾನಿಸಲಾಯಿತು.