ಚಾಕುವಿನಿಂದ ಇರಿದು ಶೇಷಾದ್ರಿಪುರಂ 1 ನೇ ಮುಖ್ಯರಸ್ತೆಯಲ್ಲಿ ಮಹಿಳೆಯನ್ನ ಕೊಲೆ ಮಾಡಿರೋ ದುಷ್ಕರ್ಮಿಗಳು. ಶರಣಮ್ಮ ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದ್ದು, ಮೂಲತಃ ಬಿಜಾಪುರದ ಇಂಡಿಯವರು ಎಂದು ಹೇಳಲಾಗಿದೆ. ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡ್ತಾ ಇದ್ದ ಶರಣಮ್ಮ ಹಾಗೂ ಪತಿ, ಬಿಜಾಪುರ ಮೂಲದ ವ್ಯಕ್ತಿಯಿಂದಲೇ ಕೊಲೆ ನಡೆದಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಶನಿವಾರ ಸಂಜೆ 6:30 ರ ಸುಮಾರಿಗೆ ಕೊಲೆ ಮಾಡಿದ ವ್ಯಕ್ತಿ ಬಂದಿದ್ದಾನೆ, ಏಕಾಏಕಿ ಶರಣಮ್ಮ ಜೊತೆ ಜಗಳ ಆಡಿದ್ದಾನೆ. ಬಳಿಕ ತನ್ನ ಬಳಿಯ ಚಾಕುವಿನಿಂದ ಚುಚ್ಚಿ ಎಸ್ಕೇಪ್ ಆಗಿದ್ದಾನೆ. ಶರಣಮ್ಮ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಿ ಆರೋಪಿಗಾಗಿ ಶೇಷಾದ್ರಿಪುರಂ ಪೊಲೀಸರ ಹುಡುಕಾಟ