ತುಮಕೂರು: ನಗರದಲ್ಲಿ ಪಾಲಿಕೆ ಕಸ ಪರಿವರ್ತಕ ಯಂತ್ರಕ್ಕೆ ಸಿಲುಕಿ ಟೆಕ್ನಿಷಿಯನ್ ಸಾವು
ಮಹಾನಗರ ಪಾಲಿಕೆ ಕಸ ಪರಿವರ್ತಕ ಯಂತ್ರಕ್ಕೆ ಸಿಲುಕಿ ನೌಕರ ಮೃತಪಟ್ಟಿರುವ ಘಟನೆ ನಗರದ ರಿಂಗ್ ರಸ್ತೆ ಬಳಿಯ ರೈಲ್ವೇ ಅಂಡರ್ ಪಾಸ್ ಬಳಿ ನಡೆದಿದೆ. ಶನಿವಾರ ಬೆಳಿಗ್ಗೆ 11 ಗಂಟೆಯಲ್ಲಿ ಈ ದುರಂತ ಸಂಭವಿಸಿದೆ ಕಸವನ್ನು ಕಂಪ್ರೆಸ್ ಮಾಡುವ ಯಂತ್ರಕ್ಕೆ ಸಿಲುಕಿ ಒರಿಸ್ಸಾ ಮೂಲದ ಟೆಕ್ನಿಷಿಯನ್ 30 ವರ್ಷದ ಆಶಿಶ್ ರಂಜನ್ ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಯಂತ್ರದ ರಭಸಕ್ಕೆ ಮೃತ ಯುವಕ ಆಶಿಶ್ ತಲೆ ಜಜ್ಜಿ ಹೋಗಿದ್ದು ತೀವ್ರ ರಕ್ತ ಸ್ರಾವವಾಗಿ ಮೃತಪಟ್ಟಿದ್ದಾನೆ. ಕಳೆದ ಆರು ತಿಂಗಳ ಹಿಂದೆ ಪಾಲಿಕೆ ವತಿಯಿಂದ ನೂತನವಾಗಿ ಯಂತ್ರವನ್ನು ಖರೀದಿಸಲಾಗಿತ್ತು ಸರಿಯಾಗಿ ಕೆಲಸ ನಿರ್ವಹಿಸದ ಹಿನ್ನೆಲೆಯಲ್ಲಿ ಬೆಂಗಳೂರು ಮೂಲದ ಪಿ ಟಿ ಎಸ್ ಕಂಪನಿಗೆ ಯಂತ್ರ ಸರಿ ಪಡಿಸಲು ತಿಳಿಸಲಾಗಿತ್ತು.