ತೀರ್ಥಹಳ್ಳಿ: ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಯಕ್ಷಗಾನ ಕಲಾವಿದರಿಂದ ಮೇಳ, ಪಂಜಿನಾ ಮೆರವಣಿಗೆ ಮೂಲಕ ಮತದಾನ ಜಾಗೃತಿ
ತೀರ್ಥಹಳ್ಳಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಸ್ವೀಪ್ ಸಮಿತಿಯಿಂದ ಗುರುವಾರ ಸಂಜೆ 6 ಗಂಟೆಗೆ ಮತದಾನ ಜಾಗೃತಿ ನಡೆಸಲಾಯಿತು. ಪಟ್ಟಣ ಪಂಚಾಯಿತಿ ತಾಲ್ಲೂಕು ಆಡಳಿತ ಚುನಾವಣಾ ಆಯೋಗದ ವತಿಯಿಂದ ತೀರ್ಥಹಳ್ಳಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಯಕ್ಷಗಾನ ಕಲಾವಿದರ ಮೇಳ, ಪಂಜಿನಾ ಮೆರವಣಿಗೆ ಮೂಲಕ ಮತದಾನ ಮಾಡುವಂತೆ ಕರೆ ನೀಡಲಾಯಿತು. ಮತದಾನ ನಮ್ಮ ಹಕ್ಕು ಎಂಬುವ ಘೋಷಣೆಯನ್ನು ಕೂಗುತ್ತಾ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಮತದಾನ ಜಾಗೃತಿ ಕಾರ್ಯಕ್ರಮವನ್ನು ನಡೆಸಿದರು.