ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಆಟೋ ರಿಕ್ಷಾ ಚಾಲಕನಿಗೆ ಗ್ಯಾಂಗ್ ಒಂದು ಹಿಗ್ಗಾಮುಗ್ಗ ಥಳಿಸಿದ ಘಟನೆ ಹುಬ್ಬಳ್ಳಿ ರೈಲ್ವೆ ನಿಲ್ದಾಣ ಬಳಿ ನಡೆದಿದೆ.. ಈ ಆಟೋ ಚಾಲಕ ಬಾಡಿಗೆ ಮುಗಿಸಿಕೊಂಡು ಬರುವಾಗ, ಗುರಾಯಿಸಿ ನೋಡ್ತಿಯಾ ಅಂತ ಯುವಕರ ಗ್ಯಾಂಗ್ ಒಂದು ಮನ ಬಂದಂತೆ ಹೊಡೆದಿದ್ದಾರೆ. ಅಷ್ಟೇ ಅಲ್ಲೆ ಜೀವ ಬೆದರಿಕೆ ಹಾಕಿದ್ದಾರಂತೆ. ಅವರಿಂದ ತಪ್ಪಿಸಿಕೊಂಡ ಚಾಲಕ ಪೊಲೀಸ್ ಠಾಣೆಗೆ ಓಡಿ ಹೋಗಿ ಜೀವ ಉಳಿಸಿಕೊಂಡಿದ್ದಾನೆ. ಈ ಘಟನೆ ಹುಬ್ಬಳ್ಳಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.