ಸಿದ್ಧಾಪುರ: ಕಾಳೆನಳ್ಳಿಯಲ್ಲಿ ಯುವಕನ ಆತ್ಮಹತ್ಯೆ ಪ್ರಕರಣ, ಕವಚೂರ್ ಬಳಿ ಇಬ್ಬರು ಆರೋಪಿಗಳ ಬಂಧನ
ಸಿದ್ದಾಪುರದ ಕಾಳೆನಳ್ಳಿಯಲ್ಲಿ ನಡೆದ ಯುವಕ ಸಂತೋಷ ನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪಟ್ಟಣದ ಪೊಲೀಸರು ಬಂಧಿಸಿದ್ದಾರೆ ಎಂದು ರವಿವಾರ ಮಧ್ಯಾಹ್ನ 3ಕ್ಕೆ ಮಾಹಿತಿ ನೀಡಿದ್ದಾರೆ. ಸಿದ್ದಾಪುರದ ಚನ್ಮಾವ್ ನ ಹೇಮಂತ ನಾಯ್ಕ, ಶಿವಕುಮಾರ ನಾಯ್ಕ ಬಂದಿತ ಆರೋಪಿಗಳಾಗಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಗಳಾದ ಚರಣ, ಮನೋಜ್, ಲೋಕೇಶ ಪತ್ತೆಗೆ ಪೊಲೀಸರು ಹುಡುಡಾಟ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹಲವಾರು ಜನರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಬಂದಿತ ಆರೋಪಿಗಳು ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ಸಿದ್ದಾಪುರದ ಕವಚೂರ್ ಬಳಿ ಬಂಧಿಸಲು ಯಶಸ್ವಿಯಾಗಿದ್ದಾರೆ.