ಬೆಂಗಳೂರು ಉತ್ತರ: ಧರ್ಮಸ್ಥಳ ಪ್ರಕರಣ; ಪುಣ್ಯ ಕ್ಷೇತ್ರಕ್ಕೆ ಯಾವುದೇ ಕಳಂಕ ಬರಬಾರದು: ನಗರದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಧರ್ಮಸ್ಥಳ ತಲೆಬುರುಡೆ ಪ್ರಕರಣ ವಿಚಾರಕ್ಕೆ ಸಂಬಂಧಿಸಿ ಮಂಗಳವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಧರ್ಮಸ್ಥಳಕ್ಕೆ ಯಾವುದೇ ಕಳಂಕ ಬರಬಾರದು, ಆ ನಿಟ್ಟಿನಲ್ಲಿ ನಮ್ಮ ಸರ್ಕಾರ ಕಾರ್ಯ ಮಾಡುತ್ತೆ. ಗೃಹ ಸಚಿವರು ಕಳೆದ ದಿನ ಉತ್ತರ ನೀಡಿದ್ದಾರೆ. ಆದಷ್ಟೂ ಶೀಘ್ರದಲ್ಲೇ ಸತ್ಯ ಗೊತ್ತಾಗಲಿದೆ ಎಂದರು. ಇನ್ನು ಜನಾರ್ದನ ರೆಡ್ಡಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿ, ಅವರು ಬಹಳಷ್ಟು ಸಂಶೋಧನೆ ಮಾಡಿರಬೇಕು. ಅನಾಮಿಕ ಹೇಗೆ ಅಗೆಸುತ್ತಿದ್ದಾನೆ ಅಲ್ವಾ. ನಮ್ಮ ಉತ್ತರ ಕನ್ನಡ ಕಡೆ ಅಗೆಸುತ್ತಾರೆ ಅಂತಾರೆ. ರೆಡ್ಡಿ ಅವರು ಕೂಡ ಸಂಶೋಧನೆ ಮಾಡಿಸಬೇಕು ಎಂದರು.