ಕಡೂರು: ನಗರದ ಯಳನಾಡು ಮಠದಲ್ಲಿ ಡಾ. ಹಳಕಟ್ಟಿ ಕುರಿತು ಉಪನ್ಯಾಸ ಕಾರ್ಯಕ್ರಮ
ಹನ್ನೆರಡನೆ ಶತಮಾನದ ಬಸವಾದಿ ಶರಣರ ವಚನ ಸಾಹಿತ್ಯಕ್ಕೆ ಹೊಸ ಮೆರಗು ನಾಡಿಗೆ ಧಾರೆಯೆರದವರು ಡಾ.ಹಳಕಟ್ಟಿ ಶರಣರು ಎಂದು ಪ್ರಾಧ್ಯಾಪಕ ಮುದ್ದೇನಹಳ್ಳಿ ಎಸ್.ಎನ್.ಆನಂದ್ ತಿಳಿಸಿದರು. ತಾಲೂಕು ಶರಣ ಸಾಹಿತ್ಯ ಪರಿಷತ್ ಮತ್ತು ತಾಲ್ಲೂಕು ಕದಳಿ ವೇದಿಕೆ ಸಹಯೋಗದೊಂದಿಗೆ ಸೋಮಾವಾರ 12.30ಕ್ಕೆ ನಡೆಸಲಾಯಿತು. ಪಟ್ಟಣದ ಯಳನಡು ಮಠದಲ್ಲಿ ಶರಣರ ಬೆಳದಿಂಗಳು ಉಪನ್ಯಾಸ ಮಾಲಿಕೆ 23ರ ಕಾರ್ಯಕ್ರಮದಲ್ಲಿ ಡಾ.ಹಳಕಟ್ಟಿ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.ಕತ್ತಲೆಯಲ್ಲಿದ್ದ ವಚನ ಸಾಹಿತ್ಯವನ್ನು ಬೆಳಕಿಗೆ ತಂದು ಸಮಾಜದ ಪ್ರತಿಯೊಬ್ಬರಿಗೂ ಮುಟ್ಟುವಂತೆ ಮಾಡಿದ ಶ್ರೇಷ್ಠ ವ್ಯಕ್ತಿ ಡಾ.ಹಳಕಟ್ಟಿ ಎಂದರು