ಬಿಹಾರ ಚುನಾವಣಾ ಫಲಿತಾಂಶ ವಿಚಾರವಾಗಿ, ಸದಾಶಿವನಗರದಲ್ಲಿ ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಗೃಹ ಸಚಿವ ಪರಮೇಶ್ವರ್ ಭೇಟಿ ಬಳಿಕ ಯುಪಿ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಮಾಧ್ಯಮಗಳ ಜೊತೆ ಮಾತನಾಡಿ, ಬಿಹಾರ ಚುನಾವಣಾ ಪ್ರಚಾರದ ವೇಳೆ ಜನ ಬದಲಾವಣೆ ಬಯಸಿದ್ದರು. ನಿರುದ್ಯೋಗ, ಬೆಲೆ ಏರಿಕೆ ಬಗ್ಗೆ ಜನ ಚರ್ಚೆ ನಡೆಸಿದ್ರಾ ಗೊತ್ತಿಲ್ಲ. ನಾವು ಇದೇ ರೀತಿ ಟಾರ್ಗೆಟ್ ಫಿಕ್ಸ್ ಮಾಡಬೇಕಿದೆ. ಗ್ಯಾರಂಟಿ ಪರ ಬ್ಯಾಟಿಂಗ್ ಮಾಡಿದ ಅಖಿಲೇಶ್. ಉತ್ತರ ಪ್ರದೇಶದಲ್ಲೂ ಗ್ಯಾರಂಟಿ ಘೋಷಣೆ ಮಾಡಬೇಕಾಗಿದೆ ಎಂದರು.