ಪವರ್ ಶೇರಿಂಗ್ ಕುರಿತಂತೆ ಎಂಎಲ್ಸಿ ಹೆಚ್ ವಿಶ್ವನಾಥ್ ಅವರು ವಿಧಾನಸೌಧದಲ್ಲಿ ಮಂಗಳವಾರ ಸಂಜೆ 5 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿ, ನನ್ನ ಪ್ರಕಾರ, ಇನ್ನೊಬ್ಬರ ಪ್ರಕಾರ ಅಂತಲ್ಲ. ಡಿಕೆಶಿ ಅವರಿಗೆ ಆಡಳಿತ ಹಸ್ತಾಂತರ ಮಾಡಬೇಕು. ಒಕ್ಕಲಿಗ ಸಮುದಾಯ ಕೂಡ ಓಟ್ ಹಾಕಿದೆ. ಕಾಂಗ್ರೆಸ್ಗೆ ನಮ್ಮಕಡೆ 4-5 ಸಾವಿರ ಓಟ್ ಬರ್ತಿತ್ತು. ಈ ಬಾರಿ 15-20 ಸಾವಿರ ಓಟ್ ಬಂದಿದೆ. ಕಾರಣ ನಮ್ಮ ಒಕ್ಕಲಿಗ ಹುಡುಗನೂ ಅಧಿಕಾರ ಹಿಡೀಲಿ ಅಂತ. ಎಲ್ಲಾ ಸೇರಿ ಕಾಂಗ್ರೆಸ್ ಗೆ 136 ಸೀಟು ಬಂದಿದೆ. ಹಾಗಾಗಿ ಅಧಿಕಾರ ಬಿಟ್ಟುಕೊಡಬೇಕು. ಅಧಿಕಾರಕ್ಕೆ ಬರಲು ಡಿಕೆ ಒಬ್ಬರೇ ಕಾರಣ ಅಂತ ಹೇಳ್ತಿಲ್ಲ. ಜಾತಿ, ಧರ್ಮ ಎಲ್ಲವೂ ಕಾರಣ ಆಗಲಿದೆ.