ಕಬ್ಬ ಬೆಳೆಗಾರರ ಬೆಲೆ ನಿಗಧಿ ಕುರಿತು ಹೆಚ್ಚುವರಿ, 50ರೂ ಕೊಡಲು ಸಾಧ್ಯವಿಲ್ಲ ಎನ್ನುವ ಕಾರ್ಖಾನೆ ಮಾಲೀಕರ ಸಂಘದ ಹೇಳಿಕೆಗೆ ಸಂಬಂಧಿಸಿ ಶುಕ್ರವಾರ ರಾತ್ರಿ 7 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಶಿವಾನಂದ ಪಾಟೀಲ್ ಅವರು, ನಾವು ಕೊಟ್ಟೆ ಕೊಡಿಸ್ತೇವೆ, ನಾವು ಹೇಳಿದ್ದೇವಲ್ಲ, ಸಿಎಂ ಘೋಷಣೆ ಮಾಡಿದ್ದಾರಲ್ಲ. ಅವರು ಹೇಳ್ತಾರೆ ರಿ ನಾವು ಕೊಡಿಸ್ತೇವೆ. ನಮಗೆ ಗೊತ್ತು ಕೊಡಿಸೋದು. ಅವರಿಗೆ ಎಲ್ಲಾ ವ್ಯವಸ್ಥೆ ಮಾಡ್ತೇವೆ. ಹೆಚ್ಚುವರಿ ಹಣ ಕೊಡಿಸ್ತೇವೆ. ಬೇರೆ ಜಿಲ್ಲೆಗಳಲ್ಲಿ ಈಗಾಗಲೇ ಇತ್ಯರ್ಥ ಆಗಿದೆ. ಯಾವುದೇ ಗೊಂದಲ ಬೇಡ. ಬೆಳಗಾವಿದು ಮಾತ್ರ ಬೇರೆ ಸಮಸ್ಯೆ, ನಾವು ಅಲ್ಲಿಯೂ ಹೆಚ್ಚುವರಿ ಹಣ ಕೊಡಿಸ್ತೇವೆ ಎಂದರು.