ಸತೀಶ್ ಜಾರಕಿಹೊಳಿ- ಡಿಕೆಶಿ ಭೇಟಿ ವಿಚಾರಕ್ಕೆ ಸಂಬಂಧಿಸಿ ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಕುಮಾರ ಕೃಪಾ ರಸ್ತೆ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಅವರು, ಮೊದಲ ಬಾರಿ ಬೇಟಿ ಏನಲ್ಲ.. ಪಕ್ಷದ ಅಧ್ಯಕ್ಷರು ಅನೇಕ ಬಾರಿ ಬೇಟಿಯಾಗಿದ್ದೇವೆ. ಪಕ್ಷ ಕಚೇರಿಯಲ್ಲಿ ಭೇಟಿಯಾಗಿದ್ದೇವು, ಅವರ ಮನೆಯಲ್ಲಿ ಭೇಟಿಯಾಗಿದ್ದೇವೆ ನಡೀತಾನೆ ಇರುತ್ತೆ ಅದರಲ್ಲೇನು ವಿಶೇಷ ಇಲ್ಲ, ಎಲ್ಲರೂ ಒಗ್ಗಟ್ಟನಿಂದ ಇರಬೇಕು, ಪಕ್ಷದಿಂದ ಒಗ್ಗಟ್ಟಿನಿಂದ ಇರುವುದು ಉದ್ದೇಶ, ಸಿಎಂ ಮಾಡುವ ವಿಚಾರ ಹೈಕಮಾಂಡ್ ತೀರ್ಮಾನ ಮಾಡಬೇಕು ಎಂದರು.