ಒಣಕೆ ಓಬವ್ವರಂತೆ ಮಹಿಳೆಯರು ಮುಖ್ಯವಾಹಿನಿಗೆ ಬನ್ನಿ: ಬೇತಮಂಗಲದಲ್ಲಿ ತಹಸೀಲ್ದಾರ್ ಭರತ್ ಬೇತಮಂಗಲದಲ್ಲಿ ಬಸ್ ನಿಲ್ದಾಣದಲ್ಲಿ ಶುಕ್ರವಾರ ಒನಕೆ ಓಬವ್ವ ಜಯಂತಿಯನ್ನು ಛಲವಾದಿ ಮಹಾಸಭಾ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಿದರು. ಪಟ್ಟಣದ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತರ ಆಯೋಜಿಸಿದ್ದ ಪುಷ್ಪ ಪಲ್ಲಕ್ಕಿಗೆ ಚಾಲನೆ ನೀಡಿ ಕೆಜಿಎಫ್ ತಹಸೀಲ್ದಾರ್ ಎಚ್ ಕೆ ಭರತ್ ಮಾತನಾಡಿ, ಕೇವಲ ಒಂದು ಒನಕೆ ಸಹಾಯದ ಮೂಲಕ ನೂರಾರು ಸೈನಿಕರನ್ನು ಕೊಂದು ಹೈದರಾಲಿ ಸಾಮ್ರಾಜ್ಯದ ಕೋಟೆಯನ್ನು ಕಾಪಾಡಿದ ನಿಟ್ಟಿನಲ್ಲಿ ಓಬವ್ವ ಅವರನ್ನು ವೀರ ಒಣಕೆ ಓಬವ್ವ ಎಂದು ಕರೆಯಲಾಯಿತು ಎಂದರು. ಕನ್ನಡ ವೀರರ ಮಣಿಯ ಎಂಬ ಹಾಡಿನ ಮೂಲಕ ಅವರ