ಸಿಎಂ, ಡಿಸಿಎಂ ಬ್ರೇಕ್ ಫಾಸ್ಟ್ ವಿಚಾರಕ್ಕೆ ಸಂಬಂಧಿಸಿ ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಅವರು ಶನಿವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಕುಮಾರಕೃಪಾ ರಸ್ತೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಇಬ್ಬರು ಮಾತನಾಡಬೇಕೆಂಬ ಸಲಹೆ ಇತ್ತು. ಹಾಗಾಗಿ ಈ ಸಭೆ ನಿಗದಿಯಾಗಿತ್ತು. ನಾನು ಸೌಜನ್ಯಕ್ಕೆ ಭೇಟಿ ಮಾಡಲು ಹೋಗಿದ್ದೆ. ಈ ವೇಳೆ ನನ್ನನ್ನೂ ಕೂಡ ಅವರು ಕೂರಿಸಿಕೊಂಡ್ರು, ನಂತರ ಅವರಿಬ್ಬರು ಚರ್ಚೆ ಮಾಡಿದ್ದಾರೆ. ಅಷ್ಟು ಬಿಟ್ಟರೆ ನನಗೇನೂ ಹೆಚ್ಚಿನ ಮಾಹಿತಿ ಇಲ್ಲ. ನಿಮಗೆ ಎಷ್ಟು ಗೊತ್ತೋ ಅಷ್ಟೇ ನನಗೆ ಗೊತ್ತು. ಹೈ ಕಮಾಂಡ್ ನಾಯಕರು ಕರೆ ಮಾಡಿದರು. ಪಕ್ಕದಲ್ಲಿದ್ದರೆ ಅವರಿಗೆ ಫೋನ್ ಕೊಡಿ ಅಂದ್ರು, ಹಾಗಾಗಿ ನಾನು ಅವರಿಗೆ ಫೋನ್ ಕೊಟ್ಟೆ. ಅಷ್ಟು ಬಿಟ್ಟರೆ ಬೇರೆ ವಿಶೇಷ, ವಿಶ್ಲೇಷಣೆ ಇಲ್ಲ,