ಮಲ್ಲಿಕಾರ್ಜುನ ಖರ್ಗೆ ಅವರ ಭೇಟಿ ಬಳಿಕ ಶಾಸಕ ಅಜಯ್ ಸಿಂಗ್ ಅವರು, ಸದಾಶಿವನಗರದಲ್ಲಿ ಶನಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮಾತನಾಡಿ, ಅವರು ನಮ್ಮ ಜಿಲ್ಲೆಯವರು ಹಾಗಾಗಿ ಬಂದು ಭೇಟಿಯಾಗಿದ್ದೇವೆ. ಎಐಸಿಸಿ ಅಧ್ಯಕ್ಷರಾಗಿ ಕರ್ನಾಟಕದ ಬಗ್ಗೆ ಮಾಹಿತಿ ಇದೆ. ಏನಿದೆ ಅದರ ಬಗ್ಗೆ ವರಿಷ್ಠರು ತೀರ್ಮಾನ ಮಾಡ್ತಾರೆ. ಸಂಪುಟ ಪುನರ್ ರಚನೆ ಸೇರಿ ಬೇರೆ ವಿಚಾರವಾಗಿ ತೀರ್ಮಾನ ಮಾಡ್ತಾರೆ. ಸಿಎಂ ಡಿಸಿಎಂ ಕೂಡ ಹೇಳಿದ್ದಾರೆ ಹೈ ಕಮಾಂಡ್ ಸುಪ್ರೀಂ ಅಂತ. ಸುರ್ಜೇವಾಲಾ, ವೇಣುಗೋಪಾಲ್ ಜೊತೆ ಸಮಾಲೋಚನೆ ಮಾಡ್ತಾರೆ. ಸಂಪುಟ ರೀಷಫಲ್ ಬಗ್ಗೆಯೂ ನಾಯಕರು ತೀರ್ಮಾನ ಮಾಡ್ತಾರೆ ಎಂದರು.