ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಕಮಲಾನಗರದಲ್ಲಿನ ಬಿಬಿಎಂಪಿ ಮಹಾಲಕ್ಷ್ಮೀ ರೆಫರಲ್ ಆಸ್ಪತ್ರೆಯ ನವಜಾತ ಶಿಶುಗಳ ನೂತನ ಎನ್.ಐ.ಸಿ.ಯು ಘಟಕವನ್ನು ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಶಾಸಕ ಗೋಪಾಲಯ್ಯ ಅವರು ಭಾನುವಾರ ಸಂಜೆ 4 ಗಂಟೆ ಸುಮಾರಿಗೆ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಅವಾಹನ್ ಫೌಂಡೇಶನ್ ಸಿಇಓ ಬ್ರಜ್ ಕಿಶೋರ್ ಪ್ರಸಾದ್, ಉಪನಿರ್ದೇಶಕ ಡಾ.ಬಸವರಾಜ್ ಕಬಾಡಿ, ಡಾ.ಎಂ.ಆರ್ ಸವಿತಾ, ಡಾ.ಭಾನುಪ್ರಕಾಶ್, ಡಾ.ಪ್ರದೀಪ್, ಹಾಗೂ ಇತರರು ಹಾಜರಿದ್ದರು.