ಗೋಕರ್ಣದ ಸಮುದ್ರ ಅಲೆಗೆ ಸಿಲುಕಿ ಜೀವಾಪಾಯದಲ್ಲಿದ್ದ ಇಬ್ಬರ ಪ್ರವಾಸಿಗರನ್ನ ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ ಘಟನೆ ಇಲ್ಲಿನ ಮುಖ್ಯ ಕಡಲತೀರದಲ್ಲಿ ಮಂಗಳವಾರ ಮಧ್ಯಾಹ್ನ 3ರ ಸುಮಾರು ನಡೆಸಿದೆ. ಗುಲ್ಬರ್ಗ ಜಿಲ್ಲೆ ವಾಡಿ ತಾಲೂಕಿನ ಸಂಗಮೇಶ್ ರಾಜಪ್ಪ ಪಾಟೀಲ್ (23) ಹಾಗೂ ಬೀದರ್ ಜಿಲ್ಲೆಯ ಜಯಪ್ರಕಾಶ್ (23) ಜೀವಾಪಾಯದಿಂದ ಪಾರಾಗಿ ಬಂದ ಪ್ರವಾಸಿಗರಾಗಿದ್ದಾರೆ. ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿಗಳಾದ ಇವರು ಒಟ್ಟು 10 ಜನ ಸ್ನೇಹಿತರೊಂದಿಗೆ ಇಲ್ಲಿಗೆ ಪ್ರವಾಸಕ್ಕೆ ಬಂದಿದ್ದು ಕಡಲ ತೀರದಲ್ಲಿ ಈಜಾಡಲು ತೆರಳಿದಾಗ ಇಬ್ಬರು ಸುಳಿಗೆ ಸಿಲುಕಿದ್ದರು.