ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಅವರು ಬುಧವಾರ ಸಂಜೆ 6 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿ, ಬಿಜೆಪಿ ಕಚೇರಿಯಲ್ಲಿ ಸಂವಿಧಾನ ದಿನದ ಕಾರ್ಯಕ್ರಮ ಮಾಡುವ ಬಗ್ಗೆ ಚರ್ಚೆ ಮಾಡಿದ್ದೇವೆ. ಬಿಜೆಪಿ ಒಂದು ವಾರಗಳ ಕಾಲ ಭೀಮ ನಡೆ ಕಾರ್ಯಕ್ರಮ ಮಾಡಲಿದೆ. ನವೆಂಬರ್ 26ರಿಂದ ಒಂದು ವಾರ ಕಾರ್ಯಕ್ರಮ ಮಾಡಲಿದ್ದೇವೆ. ಏಳು ದಿನಗಳ ಕಾಲ ಭೀಮ ಸ್ಮರಣೆ ಕಾರ್ಯಕ್ರಮ ಮಾಡಲು ಸಭೆ ಮಾಡಿದ್ದೇವೆ. ರಾಜ್ಯದಿಂದ ಅನೇಕ ನಾಯಕರು ಬಂದಿದ್ದರು. ಪ್ರಮುಖವಾಗಿ ಕಾಂಗ್ರೆಸ್ ಅಂಬೇಡ್ಕರ್ ಅವರಿಗೆ ಬಗೆದ ದ್ರೋಹ. ಅಂಬೇಡ್ಕರ್ ಅವರನ್ನ ಚುನಾವಣೆಯಲ್ಲಿ ಸೋಲಿಸಿದ್ದು, ಭಾರತ ರತ್ನ ಕೊಡದ ಬಗ್ಗೆ ಮತ್ತು ಸತ್ತಾಗ ಜಾಗ ಕೊಡದ ಬಗ್ಗೆ ಜನರಿಗೆ ತಿಳಿಸುತ್ತೇವೆ ಎಂದರು.