ಮೈಸೂರು: ಈದೇಶದ ಅರ್ಥ ವ್ಯವಸ್ಥೆ ನಿರ್ವಹಣೆ ಮಾಡುವುದು ಸಂಡೂರು ಮೈನ್ಸ್ನಿಂದ ಕದ್ದು ಮಾರಾಟ ಮಾಡಿದ್ರಲ್ಲ ಆ ರೀತಿನಾ: ನಗರದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ
Mysuru, Mysuru | Jul 6, 2025 ಆರ್ ಎಸ್ ಎಸ್ ಬ್ಯಾನ್ ಮಾಡುತ್ತೇವೆ ಎಂಬ ಪ್ರಿಯಾಂಕ ಖರ್ಗೆ ಹೇಳಿಕೆ ವಿಚಾರ. ಸದನದ ಒಳಗೆ ನೀವು ಫೈಲ್ಸ್ ಪ್ರಿಯಾಂಕ, ಸದನದ ಹೊರಗೆ ನೀವು ಕೂಗು ಮಾರಿ ಖರ್ಗೆ. ಆರ್ ಎಸ್ ಎಸ್ ಬ್ಯಾನ್ ಮಾಡ್ತೀರಾ? ನೀವು ಯಾರಾ ಮಗಳು ಹೆಸರು ಇಟ್ಕೊಂಡಿದ್ದರಲ್ಲಾ ಅವರ ಕೈಯಲ್ಲೇ ಆಗಿಲ್ಲ. ಅವರು ಬ್ಯಾನ್ ಮಾಡಿದ್ರು ಅಧಿಕಾರ ಕಳೆದುಕೊಂಡ್ರು. ನೆಹರು ಕೂಡ ಬ್ಯಾನ್ ಮಾಡಿ ನಂತರ ಬ್ಯಾನ್ ವಾಪಸ್ ತೆಗೆದುಕೊಳ್ಳುವ ಅನಿವಾರ್ಯತೆ ಬಂತು. ನೆಹರು ಅವರ ಮರಿಮಗಳ ಹೆಸರು ಇಟ್ಕೊಂಡು ಏನು ಮಾಡಲು ಸಾಧ್ಯವಿಲ್ಲ. ಹೆಸರಿನಲ್ಲೂ ಸ್ವಂತಂತೆ ಇಲ್ಲ. ವ್ಯಕ್ತಿತ್ವದಲ್ಲೂ ಸ್ವಂತತೆ ಇಲ್ಲ. ಐಟಿ ಬಿಟಿ ಸಚಿವರಾಗಿ ನಿಮ್ಮ ಸಾಧನೆ ಹೇಳಿ ಬೇರೆ ರಾಜ್ಯಗಳಿಗೆ ಕಂಪನಿಗಳು ಯಾಕೆ ಹೋಗುತ್ತಿದೆ ಹೇಳಿ. ಸಂವಿಧಾನವನ್ನ ಆರ್ ಎಸ್ ಎಸ್ ರಕ್ಷಣೆ ಮಾಡುತ್ತಿದೆ ಎಂದರು.