ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಸಿಎಂ ಜೊತೆ ಸಭೆಯ ಬಳಿಕ ಗೃಹ ಸಚಿವ ಪರಮೇಶ್ವರ್ ಅವರು ವಿಧಾನಸೌಧದಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿ, ಆದಷ್ಟು ಶೀಘ್ರವಾಗಿ ಕಳ್ಳರನ್ನ ಬಂದಿಸಲಾಗುವುದು. ಸಿಎಂ ಅವರು ಸೂಚನೆ ಕೊಟ್ಟಿದ್ದಾರೆ.ಗಂಭೀರವಾಗಿ ಪರಿಗಣಿಸಿ ಆದಷ್ಟು ಶೀಘ್ರವಾಗಿ ಬಂದಿಸಲು ಸೂಚಿಸಿದ್ದಾರೆ. ಅದನ್ನೆಲ್ಲಾ ಹೇಳಿಲಿಕ್ಕೆ ಆಗಲ್ಲ.. ಎಸ್ ಐಟಿ ವರದಿ ನೀಡುವುದಕ್ಕೆ ಸೂಚನೆ ಕೊಟ್ಟಿದ್ದೇವೆ. ಯಾವಾಗ ಬೇಕಾದರೂ ವರದಿ ನೀಡಬಹುದು ಈಗಾಗಲೇ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ಮಾಡಿದ್ದೇನೆ. ಕೆಲವು ಇಂಪಾರ್ಡೆಂಟ್ ಲೀಡ್ ಸಿಕ್ಕಿದೆ, ನಾವು ಮೀಟಿಂಗ್ ಮಾಡಿದ್ದೇನೆ ಏನು ಅನ್ನೋದನ್ನ ಹೇಳೋಕೆ ಆಗಲ್ಲ ಸಿಎಂಗೂ ಮಾಹಿತಿ ಕೊಟ್ಟಿದ್ದೇವೆ ಎಂದರು.