ಶ್ರೀನಿವಾಸಪುರ: ಜಮೀನಿನ ವಿಚಾರವಾಗಿ ತೀವ್ರವಾಗಿ ಹಲ್ಲೆ ಆರೋಪ:ಗೌನಿಪಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ
ಶ್ರೀನಿವಾಸಪುರ ತಾಲೂಕಿನ ನೆಲವಂಕಿ ಹೋಬಳಿಯ ಗುಂದೇಡು ಗ್ರಾಮದ ಗೋವಿಂದರೆಡ್ಡಿ ಕುಟುಂಬದವರಾದ ಗಜೇಂದ್ರ ಮತ್ತು ಸತೀಶ್ ಎಂಬುವವರು ಬುಧವಾರ ಮನೆ ಜಮೀನ ವಿಚಾರವಾಗಿ ಕಸವನ್ನು ಎತ್ತಿಕೊಂಡು ಹೋಗುವಾಗ ನಮ್ಮ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದಾರೆಂದು ಲಕ್ಷ್ಮಿದೇವಮ್ಮ ಕುಟುಂಬದವರು ಆರೋಪಮಾಡಿದ್ದಾರೆ.ಇನ್ನು ಈ ಕುರಿತು ಲಕ್ಷ್ಮಿದೇವಮ್ಮನವರ ಸೊಸೆ ಮಾದ್ಯಮಗಳಿಗೆ ಪ್ರತಿಕ್ರಯಿಸಿ,ಕಳೆದ ಫೆಬ್ರವರಿ ತಿಂಗಳಲ್ಲಿ ಗೋವಿಂದ ರೆಡ್ಡಿ ರವರಿಂದ ಒಂದು ಲಕ್ಷದ ಇಪ್ಪತ್ತೈದು ಸಾವಿರ ರೂಗಳನ್ನು ಕೊಟ್ಟು ಪ್ರಯದ ಕರಾರು ಪತ್ರವನ್ನು ಬರೆಸಿಕೊಂಡಿರುತ್ತೇವೆ, ದಾಖಲೆಗಳು ಸಹ ನಮ್ಮ ಬಲಿ ಇದ್ದಾವೆ ಆದರೆ ಪುನಃ ಈ ಜಾಗ ನಮ್ದೇ ಎಂದು ನಮ್ಮ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು,