ರಾಜ್ಯ ಸರ್ಕಾರ ವಿಜಯಪುರಕ್ಕೆ ಕನ್ನೇರಿ ಮಠದ ಸಿದ್ದೇಶ್ವರ ಶ್ರೀಗಳ ಪ್ರವೇಶ ನಿಷೇಧಿಸಿರುವ ಕ್ರಮ ಖಂಡಿಸಿ ಕುಂದಗೋಳ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಹಿಂದೂ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು. ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಕುಂದಗೋಳ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಆಕ್ರೋಶ ವ್ಯಕ್ತಪಡಿಸಿದರು. ಕನ್ನೇರಿ ಮಠದ ಸಿದ್ದೇಶ್ವರ ಶ್ರೀಗಳಿಗೆ ನಿರ್ಭಂಧ ಹೇರುವುದು ಹಾಗೂ ಶ್ರೀಗಳನ್ನು ಅಪಮಾನ ಮ